ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಪಟ್ಟಣದ ವೈಭವ ಶಾಲಾ ಆವರಣದಲ್ಲಿ ಕವಿರಾಜ್ ಅಕಾಡೆಮಿ ಹಾಗೂ ವೈಭವ ಶಾಲಾ ವತಿಯಿಂದ ಮಕ್ಕಳಿಗೆ ಅಭಕಾಸ್ ವೇದಿಕ್ ಗಣಿತ ಚಾಂಪಿಯನ್ ಟ್ರೋಫಿ ಪರೀಕ್ಷೆ ನಡೆಯಿತು. ವಿಜೇತರಾದವರಿಗೆ ಪ್ರಶಸ್ತಿ ವಿತರಿಸಲಾಯಿತು. ವಿದ್ಯಾ ಸಂಸ್ಥೆಯ ಕಾರ್ಯದಲ್ಲಿ ಮುರುಳಿಧರ್ ಮಾತನಾಡಿ, ಗಣಿತ ಎಂದರೆ ಒಂದು ಕಾಲದಲ್ಲಿ ಕಬ್ಬಿಣದ ಕಡಲೆ ಯಾಗಿತ್ತು, ಆದರೆ ಈಗ ಮಕ್ಕಳು ಎಷ್ಟು ಸುಲಲಿತವಾಗಿ ಗಣಿತದಲ್ಲಿ ಪರಿಣಿತರಾಗಿದ್ದಾರೆ ನೊಡಿದರೆ ಖುಷಿಯಾಗುತ್ತದೆ ಎಂದರು. ಪ್ರದೀಪ್, ಶಿಲ್ಪ, ದಂಪತಿಗಳಿಬ್ಬರು ಅಭಕಾಸ್ ವೇದಿಕ್ ನಲ್ಲಿ ಅವರೇ ತಯಾರಿಸಿದ ವಿಶೇಷ ಸಾಧನೆ ಮೂಲಕ ಮಕ್ಕಳಿಗೆ ಗಣಿತವನ್ನು ಸುಲಭವಾಗಿ ಕಲಿಯುವ ಹಾಗೆ ಮಾಡಿದ್ದಾರೆ. ಇಂದು ವಿಜೇತರಾದ ಮಕ್ಕಳಿಗೆ ಟ್ರೋಪಿ ಹಾಗೂ ಪ್ರಶಸ್ತಿ ಪತ್ರ ವಿತರಣಾ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ರಮೇಶ್ ಗೌಡ, ಇಂದು ಕಾಲೇಜ್ ನ ಪ್ರಾಂಶುಪಾಲ ಜಾತಪ್ಪ ಹಾಗೂ ಶಿಕ್ಷಕರಾದ ಚೇತನ್ ಕುಮಾರ್, ಪ್ರಸನ್ನ ಹಾಗೂ ಕವಿರಾಜ್ ಅಭಕಾಸ್ ಅಕಾಡೆಮಿಯ ಸಂಸ್ಥಾಪರಾದ ಪ್ರದೀಪ್, ಶಿಲ್ಪಾ ಸೇರಿದಂತೆ ಇತರರು ಭಾಗಿಯಾಗಿದ್ದರು. ಕೊಟ್ಟೂರು ಹಾಗೂ ಇತರೆ ಶಾಲೆಯ ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
Trending
- ತಮ್ಮಯ್ಯನವರ ತಿಪ್ಪಮ್ಮ ನಿಧನ
- ಬಾಬಾ ಸಾಹೇಬರ ತತ್ವಗಳು ಸಮಾಜಕ್ಕೆ ದಾರಿ ದೀಪ
- ಮನೆ ಕಳ್ಳತನ ಮಾಡಿದ್ದ ಆರೋಪಿ ಬಂಧನ; ₹1,90,000 ಜಪ್ತಿ
- ಇಬ್ಬರು ವಂಚಕರ ಬಂಧನ; ₹29.50 ಲಕ್ಷ ವಶ
- ಸಿಡಿಲು ಬಡಿದು ಹೊತ್ತಿ ಉರಿದ ವಿಂಡ್ ಫ್ಯಾನ್
- ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಮತ್ತು ಮಹಿಳಾ ಸಾಧಕರಿಗೆ ಸನ್ಮಾನ
- ಕೇಂದ್ರದ ವಿರುದ್ಧ ಶಾಸಕ ಶ್ರೀನಿವಾಸ್ ಪ್ರತಿಭಟನೆ
- ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ

