ಕೂಡ್ಲಿಗಿ: ಇಂದಿನ ಜಗತ್ತಿಗೆ ಕೂಡ ಆಧ್ಯಾತ್ಮಿಕತೆ ಮತ್ತು ಮಾನವೀಯತೆಯ ದಾರಿ ತೋರಿಸುವಂತಹ ವಾಲ್ಮೀಕಿ ಮಹರ್ಷಿಗಳ ಜೀವನ ಸದಾ ಪ್ರೇರಣದಾಯಕ, ಅವರ ಜಯಂತಿಯದು ನಾವೆಲ್ಲರೂ ಜೀವನದ ಆದರ್ಶಗಳನ್ನು ಅಳವಡಿಸಿಕೊಳ್ಳುವ ಸಂಕಲ್ಪ ಮಾಡೋಣವೆಂದು ಕೂಡ್ಲಿಗಿ ಶಾಸಕಡಾ. ಶ್ರೀನಿವಾಸ್ ಎನ್.ಟಿ ಹೇಳಿದರು.
ತಾಲೂಕು ಕಚೇರಿಯಲ್ಲಿ ಮಂಗಳವಾರ ನಡೆದ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಂತರ ಮಾತನಾಡಿದರು, ತಳ ಸಮುದಾಯದಲ್ಲಿ ಹುಟ್ಟಿದ ವಾಲ್ಮೀಕಿ ರಾಮಾಯಣದಂತ ಮಹಾಕಾವ್ಯವನ್ನು ರಚಿಸಿ ಮಹರ್ಷಿಗಳಾದರು, ಸಾಧನೆಗೆ ಜಾತಿ, ಕುಲ, ಧರ್ಮದ ಹಂಗಿಲ್ಲ ಶ್ರದ್ಧೆ ಮತ್ತು ಪರಿಶ್ರಮವಿದ್ದರೆ ಯಾರು ಬೇಕಾದವರು ಸಾಧನೆ ಮಾಡಬಹುದು ಎಂಬುದಕ್ಕೆ ವಾಲ್ಮೀಕಿ ಅವರೆ ನಮಗೆಲ್ಲರಿಗೂ ಆದರ್ಶನ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ವಿ ಕೆ ನೇತ್ರಾವತಿ, ಪಟ್ಟಣ ಪಂಚಾಯತ್ ಅಧ್ಯಕ್ಷ ಕಾವಲಿ ಶಿವಪ್ಪ ನಾಯಕ, ವಾಲ್ಮೀಕಿ ಸಣಘದ ಅಧ್ಯಕ್ಷ ಸುರೇಶ್, ಕಂಪ್ಯೂಟರ್ ರಾಘು ಮತ್ತು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.
Trending
- ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಮತ್ತು ಮಹಿಳಾ ಸಾಧಕರಿಗೆ ಸನ್ಮಾನ
- ಕೇಂದ್ರದ ವಿರುದ್ಧ ಶಾಸಕ ಶ್ರೀನಿವಾಸ್ ಪ್ರತಿಭಟನೆ
- ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ
- ವಿದ್ಯಾರ್ಥಿಗಳಿಗೆ ಕಾನೂನು ಪಾಠ ಮಾಡಿದ ಪಿಎಸ್ಐ
- ಸ್ವಸ್ಥ ಮಣ್ಣಿನಿಂದಲೇ ಸ್ವಸ್ಥ ಆರೋಗ್ಯ : ಬಂಡ್ರಿ ದುರುಗಪ್ಪ
- ಶ್ರೀಶೈಲ ಪಾದಯಾತ್ರೆ ಹೊರಟ ಭಕ್ತರು
- ಕೂಡ್ಲಿಗಿ ತಹಶೀಲ್ದಾರ್ ಹೆಸರಿನಲ್ಲಿ ನಕಲಿ ಖಾತೆ; ಪ್ರತಿಕ್ರಿಯಿಸದಂತೆ ಮನವಿ
- ಸಂಜೆ 7 ರಿಂದ 9 ರವಗೆ ಟಿವಿ ಫೋನ್ ಬಂದ್; ಎಸ್ ಎಸ್ ಎಲ್ ಸಿ ಫಲಿತಾಂಶ ಸುಧಾರಣೆಗೆ ಮಹತ್ವದ ಹೆಜ್ಜೆ

