ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಪಟ್ಟಣದ ವೈಭವ ಶಾಲಾ ಆವರಣದಲ್ಲಿ ಕವಿರಾಜ್ ಅಕಾಡೆಮಿ ಹಾಗೂ ವೈಭವ ಶಾಲಾ ವತಿಯಿಂದ ಮಕ್ಕಳಿಗೆ ಅಭಕಾಸ್ ವೇದಿಕ್ ಗಣಿತ ಚಾಂಪಿಯನ್ ಟ್ರೋಫಿ ಪರೀಕ್ಷೆ ನಡೆಯಿತು. ವಿಜೇತರಾದವರಿಗೆ ಪ್ರಶಸ್ತಿ ವಿತರಿಸಲಾಯಿತು. ವಿದ್ಯಾ ಸಂಸ್ಥೆಯ ಕಾರ್ಯದಲ್ಲಿ ಮುರುಳಿಧರ್ ಮಾತನಾಡಿ, ಗಣಿತ ಎಂದರೆ ಒಂದು ಕಾಲದಲ್ಲಿ ಕಬ್ಬಿಣದ ಕಡಲೆ ಯಾಗಿತ್ತು, ಆದರೆ ಈಗ ಮಕ್ಕಳು ಎಷ್ಟು ಸುಲಲಿತವಾಗಿ ಗಣಿತದಲ್ಲಿ ಪರಿಣಿತರಾಗಿದ್ದಾರೆ ನೊಡಿದರೆ ಖುಷಿಯಾಗುತ್ತದೆ ಎಂದರು. ಪ್ರದೀಪ್, ಶಿಲ್ಪ, ದಂಪತಿಗಳಿಬ್ಬರು ಅಭಕಾಸ್ ವೇದಿಕ್ ನಲ್ಲಿ ಅವರೇ ತಯಾರಿಸಿದ ವಿಶೇಷ ಸಾಧನೆ ಮೂಲಕ ಮಕ್ಕಳಿಗೆ ಗಣಿತವನ್ನು ಸುಲಭವಾಗಿ ಕಲಿಯುವ ಹಾಗೆ ಮಾಡಿದ್ದಾರೆ. ಇಂದು ವಿಜೇತರಾದ ಮಕ್ಕಳಿಗೆ ಟ್ರೋಪಿ ಹಾಗೂ ಪ್ರಶಸ್ತಿ ಪತ್ರ ವಿತರಣಾ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ರಮೇಶ್ ಗೌಡ, ಇಂದು ಕಾಲೇಜ್ ನ ಪ್ರಾಂಶುಪಾಲ ಜಾತಪ್ಪ ಹಾಗೂ ಶಿಕ್ಷಕರಾದ ಚೇತನ್ ಕುಮಾರ್, ಪ್ರಸನ್ನ ಹಾಗೂ ಕವಿರಾಜ್ ಅಭಕಾಸ್ ಅಕಾಡೆಮಿಯ ಸಂಸ್ಥಾಪರಾದ ಪ್ರದೀಪ್, ಶಿಲ್ಪಾ ಸೇರಿದಂತೆ ಇತರರು ಭಾಗಿಯಾಗಿದ್ದರು. ಕೊಟ್ಟೂರು ಹಾಗೂ ಇತರೆ ಶಾಲೆಯ ಮಕ್ಕಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
Trending
- ಶಾಲೆಗಳು ಧಾರ್ಮಿಕ ಕೇಂದ್ರಗಳಾಗಬಾರದು: ಡಾ. ಶ್ರೀನಿವಾಸ್ ಎನ್ ಟಿ
- ಬಾಲಕಿಯರ ವಸತಿ ನಿಲಯಕ್ಕೆ ತಹಶೀಲ್ದಾರ್ ನೇತ್ರಾವತಿ ದಿಢೀರ್ ಭೇಟಿ
- ಕಾನಮಡಗು ಶರಣಬಸವೇಶ್ವರ ಸ್ವಾಮಿಯ ರಥೋತ್ಸವ ಸಂಪನ್ನ
- ಕ್ಷೇತ್ರದ ಜನರು ಶಿಕ್ಷಣದಿಂದ ವಂಚಿತರಾಗಬಾರದು
- ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ರಸ್ತೆ ಅಪಘಾತದಲ್ಲಿ ನಿಧನ
- ಅಭಕಾಸ್ ವೇದಿಕ್; ಗಣಿತ ಚಾಂಪಿಯನ್ ಟ್ರೋಫಿ ಪರೀಕ್ಷೆ
- ವೈಭವ ಶಾಲೆಗೆ ರಾಜ್ಯ ಮಟ್ಟದ ಪ್ರಶಸ್ತಿ
- ಕೂಡ್ಲಿಗಿ: ಬೈಕ್ ಡಿಕ್ಕಿ; ಇಬ್ಬರು ಸಾವು

